1. ಕಲ್ಯಾಣಾವೃಷ್ಟಿ ಅಭಿಯಾನ ದ ಉದ್ದೇಶವೇನು?
ಉತ್ತರ: ಶೃಂಗೇರಿಯ ಪರಮಪೂಜ್ಯ ಹಿರಿಯ ಜಗದ್ಗುರುಗಳ ಸುವರ್ಣ ಭಾರತೀ ಮಹೋತ್ಸವ ಪ್ರಯುಕ್ತ ಸ್ತೋತ್ರತ್ರಯ ಸಮರ್ಪಣೆ ಹಾಗೂ ತನ್ಮೂಲಕ ಶ್ರೀ ಶಂಕರ ಭಗವತ್ಪಾದರ ಆಶಯದಂತೆ ಸಮಸ್ತರಿಗೆ ಮನಃಶುದ್ಧಿ ಪೂರ್ವಕ ಇಷ್ಟಾರ್ಥಸಿದ್ಧಿ.
2. ಅಭಿಯಾನದ ಸ್ವರೂಪವೇನು?
ಉತ್ತರ: ಮೈಸೂರು ನಗರ ಹಾಗೂ ಜಿಲ್ಲೆಯ ತಾಲೂಕುಗಳ ಸಮಸ್ತ ಜನರಿಂದ ಜಗದ್ಗುರುಗಳ ಮತ್ತು ಎಡತೊರೆ ಗುರುಗಳ ಅನುಗ್ರಹ ಹಾಗೂ ಮಾರ್ಗದರ್ಶನದಲ್ಲಿ ಮೂರು ಸ್ತೋತ್ರಗಳನ್ನು ಅಭ್ಯಾಸ ಮಾಡಿ ನಿರ್ದಿಷ್ಟ ದಿನದಲ್ಲಿ ನಿರ್ದಿಷ್ಟ ಸಮಯದಲ್ಲಿ ಸಾಮೂಹಿಕ ಪಾರಾಯಣದ ಮೂಲಕ ಸಮರ್ಪಣೆ
3. ಯಾಕಾಗಿ ಈ ಅಭಿಯಾನದಲ್ಲಿ ಈ ಮೂರು ಸ್ತೋತ್ರಗಳನ್ನು ಆಯ್ಕೆ ಮಾಡಿದೆ? ಈ ಸ್ತೋತ್ರಗಳಿಗೆ ಅಷ್ಟೊಂದು ಮಹತ್ವ ಬರಲು ಕಾರಣವೇನು?
ಉತ್ತರ : ದೇವರು ಒಬ್ಬನೇ ಆಗಿದ್ದರೂ ಅವನಿಗೆ ನಾನಾ ರೂಪಗಳನ್ನು ಕಲ್ಪಿಸಿ ಪೂಜೆಯನ್ನು ಮಾಡುವುದು ಅನಾದಿಕಾಲದಿಂದಲೂ ಬಂದ ಪದ್ಧತಿಯಾಗಿದ್ದು ಲೋಕದಲ್ಲಿ ನಮ್ಮ ಉದ್ಧಾರಕ್ಕೆ ಪ್ರಧಾನ ಕಾರಣಕರ್ತರು (ಉಪಕಾರಿಗಳು) ಅಂದರೆ ತಾಯಿ ತಂದೆ ಮತ್ತು ಪೂಜ್ಯ ಗುರುಗಳು ಆದ್ದರಿಂದಲೇ ಜಗನ್ಮಾತೆಯನ್ನು ಕಲ್ಯಾಣ ವೃಷ್ಟಿ ಸ್ತವ ಸ್ತೋತ್ರದಮೂಲಕ, ಪಿತೃ ಸ್ವರೂಪನಾದ ಶಿವನ ಸ್ತುತಿಯಾದ ಶಿವ ಪಂಚಾಕ್ಷರನಕ್ಷತ್ರ ಮಾಲಾ ಸ್ತೋತವನ್ನು, ಗುರು ಸ್ವರೂಪನಾದ ನಾರಾಯಣನ ಸ್ತುತಿಯನ್ನು ಲಕ್ಷ್ಮೀನರಸಿಂಹ ಕರುಣಾರಸ ಸ್ತೋತ್ರದ ಮೂಲಕ ಮಾಡಲಾಗಿದೆ. ಪರಮಪೂಜ್ಯ ಜಗದ್ಗುರುಗಳಿಂದ ಸೂಚಿಸಲ್ಪಟ್ಟ ಈ ಮೂರು ಸ್ತೋತ್ರಗಳು ವಿಶೇಷವಾದ ಮಂತ್ರಶಕ್ತಿಯನ್ನು ಹೊಂದಿರುವುದರಿಂದ ಶೀಘ್ರ ಫಲಕಾರಿಯಾಗಿರುವುದರಿಂದ ಮಹತ್ವಪೂರ್ಣವಾಗಿವೆ.
4. ಯಾರು ಈ ಅಭಿಯಾನದಲ್ಲಿ ಭಾಗವಹಿಸಬಹುದು? ಅರ್ಹತೆಗಳೇನು?
ಉತ್ತರ: ಜಾತಿ -ಮತ -ವಯಸ್ಸು ಇತ್ಯಾದಿ ಯಾವುದೇ ಭೇದವಿಲ್ಲದೆ ಪ್ರತಿಯೊಬ್ಬರೂ ಇದರಲ್ಲಿ ಭಾಗವಹಿಸಬಹುದು ಇದಕ್ಕೆ ಬೇಕಾದ ಅರ್ಹತೆ ಎಂದರೆ ಪ್ರಾಥಮಿಕ ಆಸಕ್ತಿ ಉತ್ಸಾಹ ಹಾಗೂ ಸ್ವಲ್ಪ ಮಟ್ಟಿನ ಪ್ರಯತ್ನ ಗುರುಭರಂಪರೆಯ ಮಾರ್ಗದರ್ಶನದ ಅನುಸರಣೆ.